ಗುರುವಾರ, ಫೆಬ್ರವರಿ 16, 2012

ಧುಮ್ಮಿಕ್ಕಿ ಹರಿದಿದೆ..

ಮತ್ತದೇ ತೊರೆ ಧಮನಿಯೊಳಗಿಳಿದು ಧುಮ್ಮಿಕ್ಕಿ ಹರಿದಿದೆ
ಮಂದ ಬೆಳಕಿನ ಈ ತಿಳಿ ನೆರಳು 
ಬೆಟ್ಟದೆತ್ತರದ ಖುಷಿಯ ಬಾಚಿ ಮಡಿಲ ತುಂಬಿದಂತಿದೆ..
ಬೆಳಗಿಬ್ಬನಿ ದೂರದಿಂದ ಮೆಟ್ಟಲಿಳಿದು ಬರುತಿದೆ
ಪಾರದರ್ಶಕ ಮೊಗದ ತುಂಬಾ ನಿರ್ಲಿಪ್ತತೆಯ ಗುಲ್ಲೆಬ್ಬಿದೆ
ದಿನಗಳಿಂದ ಸೊರಗಿದ್ದ ನಗು ಕ್ಷಣದಲ್ಲೇ ರಾಶಿ ರಾಶಿ ಉಲ್ಬಣಿಸಿದಂತಿದೆ..

ಆಚೆ ದಿಗಂತದ ತುದಿಗಿದ್ದ ಮೌನ ಧರೆಗಿಳಿದು
ನನ್ನೊಳಗಿನಿ ಭಾವ ಕುಸುಮದಾ ಪುಷ್ಟಿಗೆ
ಮಧುವ ಎರೆಯಲು ಮಂದಹಾಸದಿ ನಿಂತಂತಿದೆ

ಮತ್ತದೇ ಸಿಹಿ ನೀರ ತೊರೆ ಧಮನಿಯೊಳಗಿಳಿದು ಧುಮ್ಮಿಕ್ಕಿ ಹರಿದಿದೆ
ಬೆಟ್ಟದೆತ್ತರದ ಖುಷಿಯ ಬಾಚಿ ಮಡಿಲ ತುಂಬಿದಂತಿದೆ..

ಶನಿವಾರ, ಫೆಬ್ರವರಿ 4, 2012


 ನಾಲ್ಕು ದಿನದ ಹಿಂದಿ ಕಾರಣಾಂತರಗಳಿಂದ ಕ್ಲಾಸಿನ ಹುಡುಗನೊಬ್ಬ ತೀರಿಕೊಂಡ,ಸುದ್ದಿ ಕಾಲೇಜಿನ ತುಂಬಾ ಹಬ್ಬಿ ನಿಂತಿತ್ತು .ವಿಸ್ತರಿಸಿ ಹೇಳಬೇಕಾದರೆ ಹುಡುಗನೊಬ್ಬ ನೊಂದು ರೈಲಿನ ಕಾಲಡಿಯಲ್ಲಿ ತಲೆಕೊಟ್ಟು  ದೇಹವ ಕಸದಂತೆ ಅನಾಥವಾಗಿ ‘ಶಿರವಿರದ ಶವ’ವೆಂಬ ಪರಿಸ್ತಿಯಲ್ಲಿ ಬಿಟ್ಟು ಹೋಗಿದ್ದನು .
ನನ್ನ ಭಾವೋದ್ವೇಗ ಆತ ಸತ್ತಿದಕ್ಕೋ ಅಥವ ಅವನ ಸಾವಿನ ಸುತ್ತ ಸೆರೆನಿಂತಿದ್ದ ಕಾರಣಗಳ ಕುರಿತಾದದ್ದೋ ಅಲ್ಲಾ,ನಿನ್ನೆಯಷ್ಟೇ ನೋಡಿದ್ದ ವ್ಯಕ್ತಿಯ ಸಾವಿನ ಸುದ್ದಿ ತಿಳಿದ ನಾನು ಪ್ರತಿಕ್ರಯಿಸಿದ ಅನಾಚಾರದ ರೀತಿ ಮತ್ತು ನೀತಿಭ್ರಷ್ಟತೆಯ ಕುರಿತಾಗಿ.
ಕಾರಣ ನೂರಾರಿದೆ ,
  • since i was one among the crowd i couldn’t respond.
  • ಯಾರೋ ಹೊರ ರಾಜ್ಯದ ಹುಡುಗ, ನಾನು ಆತನ ಸಾವಿಗೆ ಪ್ರತಿಕ್ರಯಿಸೋದು over acting ಅನ್ಸಲ್ವ .
  • ಲೇಟ್ ಆದ್ರೆ Attendence ಕೊಡಲ್ಲ ,ಮತ್ತ ಅಲ್ಲಿ ಪೊಲೀಸ್ಸು,ಪ್ರೆಸ್ಸು ನನ್ನಗ್ಯಾಕೆ ಇದರ ಉಸಾಬರಿ ಎಲ್ಲಾ..!

ಹತ್ತಾರು ಚಿಂತನ ಮಂಥನ ಮೆದುಳ ತುಂಬಾ ಮಂಕು ಎರಚಿತ್ತು.ತುರ್ತು ಪರಿಸ್ತಿತಿಯಲ್ಲಿ to be on the safer side ನಮಗೆ ನಾವೇ  ಕೊಟ್ಟುಕೊಳ್ಳುವ ಸಮಜಾಯಿಷಿ ಮಾತುಗಳಲ್ಲವೇ ಇದು!ನನ್ನ ಹಾಗೆ ಎಲ್ಲರೂ ಬುದ್ದಿ ದೌಡಾಯಿಸಿರ ಬಹುದು,ಹಾಗಾಗಿಯೇ ಏನೋ ಕ್ಲಾಸಿನ ಇಬ್ಬರು ಹುಡುಗರು ಬಿಟ್ಟರೆ ಕಾಲೇಜಿನಿಂದ ಒಬ್ಬ ನರ ಜೀವಿಯು ತಕ್ಷಣಕ್ಕೆ ಸಹಕರಿಸುವುದಿರಲಿ ಸ್ಪಂದಿಸಲೂ ಸೋತಿದ್ದರು.

ಪರಿಸ್ತಿಯ ಗಾಂಭೀರ್ಯತೆಯ ಅರಿವಾಗಿದ್ದರೆ ,ನನ್ನ ಮೂರ್ಖತನದ ಅರಿವೂ ನಿಮಗಾಗಿರುತ್ತೆ .ವಿಪರ್ಯಾಸವೆಂದರೆ ನಮ್ಮನ ನಾವು ಈ ದಿನೇ ಎಷ್ಟರ ಮಟ್ಟಿಗೆ ತಾಂತ್ರಿಕವಾಗಿಸಿದ್ದಿವೆಂದರೆ ,ಎಲ್ಲದಕ್ಕೂ ಯೋಚಿಸುತ್ತೇವೆ.ಕೆಲಸ ಮಾಡುವ ಮುನ್ನ ಅನಾನುಕೂಲ ,ಲಾಭ,ಲೋಪಗಳ ಪಟ್ಟಿ ಮಾಡುತ್ತೇವೆ ..ಯಾರಾದರು ಆಕಾಶ ತೋರಿಸಿ,how beautiful is the sky today ಅಂದ್ರೆ ,yes since it is summer disappearance of clouds are the reason to it ಅನ್ನತ್ತೀವಿ.ನಮ್ಮನ ಎಷ್ಟರ ಮಟ್ಟಿಗೆ ಬದಲಾಯಿಸಿ ಬಿಟ್ಟಿದಾರಂದ್ರೆ “thinking out of the technology is a crime”ಅನ್ನೊ ರೀತಿ ವರ್ತಿಸ್ತೀವಿ .
 
ಕ್ಲಾಸ್ನಲ್ಲಿ ಎಲ್ಲರು ನನ್ನ ಹಾಗೆ ಯೋಚಿಸಿದ್ದ್ರಲ್ಲ ಅನ್ನೊ ತೃಪ್ತಿ ನನ್ನ್ಗಂತೂ ಖಂಡಿತ ಇಲ್ಲ ,ನಾನು ಎಲ್ಲರ ಹಾಗೆ ಯೋಚಿಸೊದನ್ನ ಕಲ್ತ್ಬಿಟ್ಟನಲ್ಲ ಅನ್ನೊ ಸಣ್ಣ ಮರುಗು ಅಂತು ಇದೆ.ಇಷ್ಟಂತೂ ನಿಜ ಮುಂದೆ ನನ್ನ ಸ್ತಿಥ ಪ್ರಜ್ಞೆಯಲ್ಲಿ ಇಂಥ ಅಮಾನವೀಯತೆಯ ದೊಂಬರಾಟ ಖಂಡಿತ ನಡೆಯೋದಿಲ್ಲ ಎಂದು ನಿರ್ಧರಿಸಿದ್ದೇನೆ.


-ಗಗನ  ಮೈತ್ರಿ

ಶನಿವಾರ, ಜನವರಿ 14, 2012

೧. ನಾವು ಕಲಿಯುತ್ತಿರುವ ಶಿಕ್ಷಣ ನಮ್ಮ ಬದುಕಿಗೆ ಪೂರಕವಾಗಿದಿಯೇ ?
ಶಿಕ್ಷಣ ಎಂಥದೇ ಇರಲಿ ,ಕಲಿಕೆ ಮತ್ತು ಗ್ರಹಿಕೆಯ ಗುಣಮಟ್ಟ ಶ್ರೇಷ್ಠವಾಗಿರಬೇಕು .ಶಿಕ್ಷಣ ತಾತ್ಕಾಲಿಕ ಜ್ಞಾನವಲ್ಲ ,ಅದು ಜೀವಿಯಿಂದ ಜೀವಿಗೆ ಜೀವನವನ್ನೇ ವರ್ಗಾಹಿಸುವಂತಹದು.ಬಹುಷಃ ಇಂದು ಶಿಕ್ಷಣ ತನ್ನ ಮುಲ್ಯಗಳನ್ನು ಕಳೆಚಿ ಅರೆ ಬೆತ್ತಲೆ ನಿಂತಂತೆ ಭಾಸವಾಗುತ್ತಿದೆ.ಗಂಟೆಹಿಂದೆ ಓದಿದ್ದನ್ನ ಮತ್ತೊಂದು ಗಂಟೆಕೂತು ಕಕ್ಕುವುದಷ್ಟೇ ಇವತ್ತಿನ ಶಿಕ್ಷಣ ವ್ಯವಸ್ಥೆ ,ಹೀಗಿರುವಾಗ ಜ್ಞಾನಾರ್ಜನೆ ಹೇಗೆ ಸಾದ್ಯ!

ಹೇಳಿದ್ದೇ ಹೇಳುವರು ,ಕೇಳಿದ್ದೇ ಕೇಳುವರು
ಕೇಳಿದ್ದೇ ಕೇಳಿ ಸುಖಿಸುವರು ಜ್ಞಾನಿ
ಗಳ ಮಾರ್ಗವೇ ಬೇರೆ ಸರ್ವಜ್ಞ..

ಸರ್ವ ಜ್ಞಾನಿಯ ಈ ನುಡಿಮುತ್ತು ಸಾಕು ಇಂದಿನ ಶಿಕ್ಷಣದ ರೂಪು ರೇಖೆಯನ್ನು ತೂಗಿ ನೋಡಲು.
ಶಿಕ್ಷಣ ಎಂದಿಗೂ ಒಬ್ಬ ಮಾಮೂಲಿ ಮನುಷ್ಯನನ್ನು ಪ್ರಬುಧ್ಧ ವ್ಯಕ್ತಿಯನ್ನಾಗಿಸುವ ಚಟುವಟಿಕೆಯಂತಿರಬೇಕು ,ಮುಂದೆ ಬದುಕ ಮಹಡಿ ಕಟ್ಟುವ ಸ್ವಪ್ನದಲ್ಲಿರುವವನಿಗೆ ಪೂರಕ ಗುಣಮಟ್ಟದ ಇಟ್ಟಿಗೆ ,ನೀರು,ಸಿಮೆಂಟು ಒದಗಿಸಿ ತನ್ನ ಇಷ್ಟಾರ್ತದಂತೆ ಕಟ್ಟಡ ನಿರ್ಮಿಸುವ ದಿಕ್ಕಸೂಚಿಯಾಗಬೇಕು.ಆದ್ದರಿಂದು ಶಿಕ್ಷಣ ದುಡ್ಡಿನ ಮಹಾಮಳೆಯಡಿ ಸಮಯದ ಜೋರು ಪ್ರವಾಹಕ್ಕೆ ಸಿಕ್ಕ ಸಣ್ಣ ಹಾಯಿ ದೋಣಿಯಂತಾಗಿದೆ.ಹೀಗಿರುವಾಗ ಬೆಳವಣಿಗೆ ಹೇಗೆ ಸಾದ್ಯ!

ಮಹಾನ್ ತಪಸ್ವಿಯಂತೆ ಸುಧೀರ್ಗ ವರ್ಷಗಳ ಅಭ್ಯಾಸದ ನಂತರ ಕೊನೆಗೊಂದು ದಿನ ತನ್ನ ಕಲಿಕೆಗಿಂದು ಕೊನೆ ಎಂದು ಹೊರ ದೌಡಾಯಿಸುವ ವಿಧ್ಯಾರ್ಥಿಯ ಕೈಯಲ್ಲಿ ಪದವಿ ಪತ್ರ ಬಿಟ್ಟರೆ ಕನಿಷ್ಠ ಒಂದಾದರು ವಿಷಯದಲ್ಲಿ  ಪಾಂಡಿತ್ಯವಿರದ ಡೊಳ್ಳು ತಲೆ..ಹೋಗಲಿ ಒಂದಿಷ್ಟು ಮಾನವೀಯತೆ ,ಶೃಜನಶೀಲತೆ,ನೈತಿಕಯ ಸೊಬಗಾದರು ಬೇಡವೇ ?ಎಲ್ಲೋ ಬೆರಳೆಣಿಕೆಯ ಜನಕಷ್ಟೆ..ಇಂದಿನ ಈ ಪರಿಸ್ತಿತಿಗೆ ಕಾರಣ ,ಶಿಕ್ಷಣವೆಂದರೆ ಯುದ್ಧದಂತಾಗಿರುವುದು .ಶಿಕ್ಷಣ ದುಡಿಮೆ ಅಥವ ಭೋಗದ ವಸ್ತುವಲ್ಲ, ಅದೊಂದು ನಿರಂತರ ನಿಟ್ಟುಸಿರಿನವರೆಗೂ ಕಾಲದ ಪರಿವಿಲ್ಲದೆ ಬದುಕ ಹೆಣೆಯುವ ಕಲೆ.ಬರೀ ಪದ್ಧತಿ ,ಬಂಧನ ಮತ್ತು ಆಡಳಿತಕ್ಕೆ ಸೀಮಿತವಾಗಿರುವ ಇಂದಿನ ಶಿಕ್ಷಣ ಮುಂದಿನ ಬದುಕಿಗೆ ಪೂರಕವೇ ಅಲ್ಲಾ.

ಚಿಂತಕರ ಪ್ರಕಾರ ಸಮಾಜ ಸೇವೆ ,ಸ್ವಇಚ್ಚಿತ ಜವಾಬ್ದಾರಿ,ಸದ್ ವರ್ತನೆ ,ಸತ್ ಚಿಂತನೆಗಳಂತಹ ಕಾರ್ಯ ಯುವ ಪ್ರಜೆಗಳಿಗೆ ಹೆಚ್ಚು ವೈಭವಿಕರಿಸುತ್ತದೆ .ಚಿಂತನೆಯಲ್ಲಿ ಅಂಥ ದೊಡ್ಡ ಲೋಪ ದೋಷಗಳೇನು ಇಲ್ಲ ,ಉರಿಯುವ ಮೇಣದ ಬತ್ತಿಯೊಂದೆ ಉಳಿದ ಮೇಣದ ಬತ್ತಿಗಳನ್ನು ಉರಿಯುವಂತೆ ಮಾಡಬಲ್ಲದಲ್ಲವೇ ? ಹಾಗಂತ ಧಂಗೆ ಎದ್ದು ,ಹೋರಾಟಕ್ಕಿಳಿದು ,ಚಳುವಳಿ ಕೂಗಬೇಕಂತೆನಿಲ್ಲ.ನಮ್ಮ ನಮ್ಮ ಯೋಚನಾ ಲಹರಿಯನ್ನು ಸ್ವಲ್ಪ ತೀವ್ರವಾಗಿಸಬೇಕಷ್ಟೇ , ಜಗತ್ತಿನ ಪ್ರತಿ ಶೃಷ್ಟಿಗು ಪಕ್ಷಪಾತರಹಿತವಾದ ಬಾಳ್ವೆಗೆ ಅವಕಾಶವಿದೆ ಎಂಬುದ ತಿಳಿದು ,ಪರಿಸರದ ಕುರಿತು ಒಂದಷ್ಟು ಜಾಗೃತಭಾವ,ಸರ್ವರಿಗೂ ಸಮಬಾಳು –ಸರ್ವರಿಗೂ ಸಮಪಾಲು ಎಂಬ ಚಿಂತಾಕ್ರಾಂತಿ ಇದ್ದರಷ್ಟೇ ಸಾಕು ಇಂದು ಚಾಲನೆಯಲ್ಲಿರುವ ಬಹುತೇಕ ಕಿವುಡು ಸಮಸ್ಯೆಗಳು ಬಗೆಹರಿದಂತೆಯೇ !
ಜಿ ಎಸ್ ಶಿವರುದ್ರಪ್ಪನವರ ಚಂದದ ಸಾಲುಗಳು ,

ಅದೂ ಬೇಕು ಇದೂ ಬೇಕು ,ದಾರಿ ನೂರಾರಿವೆ ಬೆಳಕಿನರಮನೆಗೆ!
ನೂರಾರು ಭಾವದ ಭಾವಿ ,ತೋಡಿಕೊ ನಿನಗೆ ಬೇಕಾದಷ್ಟು ಸಿಹಿನೀರು
ಪಾತ್ರೆಯಾಕಾರಗಳ ಕುರಿತು ಜಗಳವೇಕೆ !

ನಮ್ಮಿಂದ ಸಮಾಜದ ನಿರ್ಮಾಣ ಎಂಬ ಸಣ್ಣ ಸತ್ಯ ಪ್ರಜ್ಞಾವಂತ ಯುವಜನಾಂಗದ ಪೂರ್ವಸಿದ್ಧ ಆಲೋಚನೆಯಾಗಬೇಕು . ಜವಾಬ್ದಾರಿಗಳಲ್ಲಿ ಅತಿ ಶ್ರೇಷ್ಠವಾದದ್ದೆಂದರೆ ಶಿಕ್ಷಣ ಧರ್ಮವೆಂಬುದ ಅರಿತು ,ತಮಗೆ ತಿಳಿದದ್ದನು ಸಮಾಜಕ್ಕೆ ಧಾರೆ ಎರೆಯುವುದೇ ಯುವಜನಾಂಗದ ಮುಖ್ಯ ಕರ್ತವ್ಯವಾಗಬೇಕು .ಉಪನಿಷತ್ತಿನ ಪ್ರಕಾರ ‘ಪತಿತಂ ,ಪತಂತಂ ,ಪತಶ್ಯಂತಂ,ಉದ್ಧರೇತ್ ಧರ್ಮಃ ‘ಅಂದರೆ ಬಿದ್ದಿರುವವನು ,ಬೀಳುತ್ತಿರುವವನು,ಮುಂದೆ ಬೀಳಲಿರುವವನು ,ಇವರನ್ನು ಉದ್ಧಾರ ಮಾಡುವುದೇ ಧರ್ಮ . ಜಾಗೃತ ಮನಸುಳ್ಳ ,ಸುಉದ್ದೇಶಕ್ಕೆಂದು ಹೊರಟ ಯುವಜನಾಂಗಕ್ಕೆ ಮಹಾಕವಿಯು  ಕವಿವಾಣಿಯನ್ನೇ ಹಾಡಿದರು ,


ನಡೆಮುಂದೆ ನಡೆಮುಂದೆ          

ನುಗ್ಗಿನಡೆ ಮುಂದೆ

ಜಗ್ಗದೆಯೇ ಕುಗ್ಗದೆಯೇ

ಹಿಗ್ಗಿನಡೆ ಮುಂದೆ.. 


ಸಮಾಜಸೇವೆ ,ಸಾಮಾಜಿಕ ಕಳಕಳಿಗಳಂತಹ ಜವಾಬ್ದಾರಿಗಳನ್ನು ಹೊರ ಬಯಸುವವನಿಗೆ ಮೊದಲು ಆತ್ಮವಿಶ್ಲೇಷಣೆ ಬೇಕು ,ಯುವ ಪ್ರತಿಭೆಗಳಿಗೆ ಮೊದಲು ತಮ್ಮ ತಮ್ಮ ಅವಶ್ಯಕತೆಗಳ ಅರಿವಿರಬೇಕು ,ಮುಂದಾಳತ್ವದ ಮುನ್ನೋಟವಿರುವವನಿಗೆ ತನ್ನ ಅವಶ್ಯಕತೆಗಳ ಅರಿವಿಲ್ಲದಿದ್ದರೆ ಹೇಗೆ ?necessity is the mother of invention ‘ಅವಶ್ಯಕತೆಯೇ  ಅನ್ವೇಷಣೆಯ ತಾಯಿ ‘.

ಶಿಕ್ಷಣ ಜೀವನದ ಗುರಿಯಲ್ಲಾ ದಾರಿಯಾಗಬೇಕು ,’ಜ್ಞಾನಕ್ಕಾಗಿ ಜ್ಞಾನ’ ಎನ್ನುವುದು ವ್ಯಕ್ತಿಗುಣವಾಗಬೇಕು ,’ಜೀವನಕ್ಕಾಗಿ ಶಿಕ್ಷಣವಲ್ಲ ಜೀವನದ ಮುಖಾಂತರ ಶಿಕ್ಷಣ’ ಎಂತಾದಾಗಷ್ಟೇ ಶಿಕ್ಷಣದ ವಿಶಾಲಾರ್ಥ ತಿಳಿದು ಕಲಿತಿರುವುದು\ಕಲಿಯುತ್ತಿರುವ ವಿದ್ಯೆ ಬದುಕಿಗೆ ಪೂರಕವಾಗಬಹುದು !






ಭಾನುವಾರ, ಜನವರಿ 8, 2012

ಮನದ ತೀರದ ತುಂಬಾ ಮರೆಯದ ಹೆಜ್ಜೆಗುರುತು..

ಹೂವ ಕಿತ್ತು ಸಮಾಧಿಯ ಮೇಲಿಟ್ಟ ಭಾವದಲೂ...


                                          
ಏನಾಗಿದೆ ನನಗೆ ,ನಗೆ ಮೂಡಿದೆ ಶೂನ್ಯದಲು
ಹೂವ ಕಿತ್ತು ಸಮಾಧಿಯ ಮೇಲಿಟ್ಟ ಭಾವದಲೂ..

                                                                       ದಿಕ್ಕು ದಿಕ್ಕು ದಿಶೆಯಲ್ಲೂ ಸೀಳು ಹೊಕ್ಕ ಬೆಳ್ಳ ಮುಗಿಲು 

                                                         ಕಾಡುತಿದೆ ಇವುಗಳ ಮುಸುಕು ಮುಸುಕು ಆಕೃತಿಗಳು
                                                         ತೊರೆಯಲಾರೆ ,ನನ್ನ ನಗಿಸಲು ನಿಂತವರಿವರು
                                                         ಜಾರಿ ಬಿತ್ತು ಸುಳ್ಳು ನಗೆಯೊಂದು ,ಜಾರದಿರೆಂದೆ ಕಣ್ಣ ಹನಿಯನು..

  ತಿರುಗಾಡುತ ತಿಮಿರ ತೋರುವ ಗಾಳಿ ಗೊಂಚಲು
  ಕದಡುವುದೆನ್ನೆದೆ ,ತುಡಿತಗಳ ತವರೂರ ಬಂಧುಗಳ ಕಂಡು

  ಹೊರದಬ್ಬಲಾರೆ ,ನನ್ನ ರಂಜಿಸಲು ಬಂದವರಿವರು
  ಉಕ್ಕಿ ಬಂತು ಜೊಳ್ಳು ನಗೆಯೊಂದು ,ಉಗುಳದಿರೆಂದೆ ಮನದಾಳದ ನೋವನು..

                                                                    ನೊಂದ ಭಾವ ಕೊರಳ ಹಿಸುಕಿ ,ಸೊರಗುವಂತೆ ಮಾಡಿತ್ತು
                                                       ಎಲ್ಲಾ ಪ್ರಶ್ನೆಗಳ ಉತ್ತರದಂತೆ ತುದಿಯವರೆಗು ನೆರಳು ಬಿಸಿಲು ಕಂಡಿತು
                                                       ಬದುಕ ನಡೆಸುವ ಬಗೆ ಹೀಗೆ ಎಂದು ಸಣ್ಣ ಭಾವಗೀತೆ ಹಾಡಿತು
                                                       ಕಿರುನಗೆಯೊಂದು ಆಗ ತುಟಿಮೇಲೆ ಕಮಲದಂತೆ ಅರಳಿತು..

    

ಮಳೆ ಬಂತು ,ನೆನಪ ತಂತು..

                                ಬಿಡದೆ ಸುರಿವ ನೆನಪ ಮಳೆ ,ಬಿಡುವವರೆಗು ಬಿಗಿ ಹಿಡಿಯಲೇ ಬೇಕು ಮೌನ ಕೊಡೆ..

ಭಾವ ಬೃಂದ ..


                ದೂರದ ಮನೆಯೊಂದು ಮನತುಂಬಿ ಕರೆದಿದೆ
                ಮರುಳು ಮನಸು ಮಥಿಸಿ ಮೌನರಾಗ ಹಾಡಿದೆ ..
                ಹೋಗುವ ದಾರಿಯಲ್ಲಿ ಪ್ರೀತಿ ಬತ್ತಿ ನೆನಪು ಮೈನೆರೆದಿದೆ
                ಮನೆಮುಂದೆ ಸ್ತಬ್ದ ಸಡಗರದ ರಂಗೋಲಿ ರೋಸಿ ನಿಂತಿದೆ
                ಮಾತಾಡಲು ಹೂ ಜೋತ ಭಾವಚಿತ್ರವೊಂದು ತೂಗಾಡಿದೆ
                ಹೆಜ್ಜೆ ಸದ್ದನ್ನೂ ಗ್ರಹಿಸುವಷ್ಟು ಮೌನ ಮಾತು ನುಂಗಿದೆ.
                                                                  ನನಗ್ಯಾಕೋ ಇಂದು,
                                                                  ತಂತಿ ಕಿತ್ತ ದಹನ ಗಾನದಿಂಪು ಹಾಯಾಗಿದೆ
                                                                  ಕಂಡ ನೋಟವೆಲ್ಲ ಬಿಳಿಯ ವಸ್ತ್ರ ಮೇಲಿನ ಹಾರದಂತಿದೆ..