ಗುರುವಾರ, ಫೆಬ್ರವರಿ 16, 2012

ಧುಮ್ಮಿಕ್ಕಿ ಹರಿದಿದೆ..

ಮತ್ತದೇ ತೊರೆ ಧಮನಿಯೊಳಗಿಳಿದು ಧುಮ್ಮಿಕ್ಕಿ ಹರಿದಿದೆ
ಮಂದ ಬೆಳಕಿನ ಈ ತಿಳಿ ನೆರಳು 
ಬೆಟ್ಟದೆತ್ತರದ ಖುಷಿಯ ಬಾಚಿ ಮಡಿಲ ತುಂಬಿದಂತಿದೆ..
ಬೆಳಗಿಬ್ಬನಿ ದೂರದಿಂದ ಮೆಟ್ಟಲಿಳಿದು ಬರುತಿದೆ
ಪಾರದರ್ಶಕ ಮೊಗದ ತುಂಬಾ ನಿರ್ಲಿಪ್ತತೆಯ ಗುಲ್ಲೆಬ್ಬಿದೆ
ದಿನಗಳಿಂದ ಸೊರಗಿದ್ದ ನಗು ಕ್ಷಣದಲ್ಲೇ ರಾಶಿ ರಾಶಿ ಉಲ್ಬಣಿಸಿದಂತಿದೆ..

ಆಚೆ ದಿಗಂತದ ತುದಿಗಿದ್ದ ಮೌನ ಧರೆಗಿಳಿದು
ನನ್ನೊಳಗಿನಿ ಭಾವ ಕುಸುಮದಾ ಪುಷ್ಟಿಗೆ
ಮಧುವ ಎರೆಯಲು ಮಂದಹಾಸದಿ ನಿಂತಂತಿದೆ

ಮತ್ತದೇ ಸಿಹಿ ನೀರ ತೊರೆ ಧಮನಿಯೊಳಗಿಳಿದು ಧುಮ್ಮಿಕ್ಕಿ ಹರಿದಿದೆ
ಬೆಟ್ಟದೆತ್ತರದ ಖುಷಿಯ ಬಾಚಿ ಮಡಿಲ ತುಂಬಿದಂತಿದೆ..

ಶನಿವಾರ, ಫೆಬ್ರವರಿ 4, 2012


 ನಾಲ್ಕು ದಿನದ ಹಿಂದಿ ಕಾರಣಾಂತರಗಳಿಂದ ಕ್ಲಾಸಿನ ಹುಡುಗನೊಬ್ಬ ತೀರಿಕೊಂಡ,ಸುದ್ದಿ ಕಾಲೇಜಿನ ತುಂಬಾ ಹಬ್ಬಿ ನಿಂತಿತ್ತು .ವಿಸ್ತರಿಸಿ ಹೇಳಬೇಕಾದರೆ ಹುಡುಗನೊಬ್ಬ ನೊಂದು ರೈಲಿನ ಕಾಲಡಿಯಲ್ಲಿ ತಲೆಕೊಟ್ಟು  ದೇಹವ ಕಸದಂತೆ ಅನಾಥವಾಗಿ ‘ಶಿರವಿರದ ಶವ’ವೆಂಬ ಪರಿಸ್ತಿಯಲ್ಲಿ ಬಿಟ್ಟು ಹೋಗಿದ್ದನು .
ನನ್ನ ಭಾವೋದ್ವೇಗ ಆತ ಸತ್ತಿದಕ್ಕೋ ಅಥವ ಅವನ ಸಾವಿನ ಸುತ್ತ ಸೆರೆನಿಂತಿದ್ದ ಕಾರಣಗಳ ಕುರಿತಾದದ್ದೋ ಅಲ್ಲಾ,ನಿನ್ನೆಯಷ್ಟೇ ನೋಡಿದ್ದ ವ್ಯಕ್ತಿಯ ಸಾವಿನ ಸುದ್ದಿ ತಿಳಿದ ನಾನು ಪ್ರತಿಕ್ರಯಿಸಿದ ಅನಾಚಾರದ ರೀತಿ ಮತ್ತು ನೀತಿಭ್ರಷ್ಟತೆಯ ಕುರಿತಾಗಿ.
ಕಾರಣ ನೂರಾರಿದೆ ,
  • since i was one among the crowd i couldn’t respond.
  • ಯಾರೋ ಹೊರ ರಾಜ್ಯದ ಹುಡುಗ, ನಾನು ಆತನ ಸಾವಿಗೆ ಪ್ರತಿಕ್ರಯಿಸೋದು over acting ಅನ್ಸಲ್ವ .
  • ಲೇಟ್ ಆದ್ರೆ Attendence ಕೊಡಲ್ಲ ,ಮತ್ತ ಅಲ್ಲಿ ಪೊಲೀಸ್ಸು,ಪ್ರೆಸ್ಸು ನನ್ನಗ್ಯಾಕೆ ಇದರ ಉಸಾಬರಿ ಎಲ್ಲಾ..!

ಹತ್ತಾರು ಚಿಂತನ ಮಂಥನ ಮೆದುಳ ತುಂಬಾ ಮಂಕು ಎರಚಿತ್ತು.ತುರ್ತು ಪರಿಸ್ತಿತಿಯಲ್ಲಿ to be on the safer side ನಮಗೆ ನಾವೇ  ಕೊಟ್ಟುಕೊಳ್ಳುವ ಸಮಜಾಯಿಷಿ ಮಾತುಗಳಲ್ಲವೇ ಇದು!ನನ್ನ ಹಾಗೆ ಎಲ್ಲರೂ ಬುದ್ದಿ ದೌಡಾಯಿಸಿರ ಬಹುದು,ಹಾಗಾಗಿಯೇ ಏನೋ ಕ್ಲಾಸಿನ ಇಬ್ಬರು ಹುಡುಗರು ಬಿಟ್ಟರೆ ಕಾಲೇಜಿನಿಂದ ಒಬ್ಬ ನರ ಜೀವಿಯು ತಕ್ಷಣಕ್ಕೆ ಸಹಕರಿಸುವುದಿರಲಿ ಸ್ಪಂದಿಸಲೂ ಸೋತಿದ್ದರು.

ಪರಿಸ್ತಿಯ ಗಾಂಭೀರ್ಯತೆಯ ಅರಿವಾಗಿದ್ದರೆ ,ನನ್ನ ಮೂರ್ಖತನದ ಅರಿವೂ ನಿಮಗಾಗಿರುತ್ತೆ .ವಿಪರ್ಯಾಸವೆಂದರೆ ನಮ್ಮನ ನಾವು ಈ ದಿನೇ ಎಷ್ಟರ ಮಟ್ಟಿಗೆ ತಾಂತ್ರಿಕವಾಗಿಸಿದ್ದಿವೆಂದರೆ ,ಎಲ್ಲದಕ್ಕೂ ಯೋಚಿಸುತ್ತೇವೆ.ಕೆಲಸ ಮಾಡುವ ಮುನ್ನ ಅನಾನುಕೂಲ ,ಲಾಭ,ಲೋಪಗಳ ಪಟ್ಟಿ ಮಾಡುತ್ತೇವೆ ..ಯಾರಾದರು ಆಕಾಶ ತೋರಿಸಿ,how beautiful is the sky today ಅಂದ್ರೆ ,yes since it is summer disappearance of clouds are the reason to it ಅನ್ನತ್ತೀವಿ.ನಮ್ಮನ ಎಷ್ಟರ ಮಟ್ಟಿಗೆ ಬದಲಾಯಿಸಿ ಬಿಟ್ಟಿದಾರಂದ್ರೆ “thinking out of the technology is a crime”ಅನ್ನೊ ರೀತಿ ವರ್ತಿಸ್ತೀವಿ .
 
ಕ್ಲಾಸ್ನಲ್ಲಿ ಎಲ್ಲರು ನನ್ನ ಹಾಗೆ ಯೋಚಿಸಿದ್ದ್ರಲ್ಲ ಅನ್ನೊ ತೃಪ್ತಿ ನನ್ನ್ಗಂತೂ ಖಂಡಿತ ಇಲ್ಲ ,ನಾನು ಎಲ್ಲರ ಹಾಗೆ ಯೋಚಿಸೊದನ್ನ ಕಲ್ತ್ಬಿಟ್ಟನಲ್ಲ ಅನ್ನೊ ಸಣ್ಣ ಮರುಗು ಅಂತು ಇದೆ.ಇಷ್ಟಂತೂ ನಿಜ ಮುಂದೆ ನನ್ನ ಸ್ತಿಥ ಪ್ರಜ್ಞೆಯಲ್ಲಿ ಇಂಥ ಅಮಾನವೀಯತೆಯ ದೊಂಬರಾಟ ಖಂಡಿತ ನಡೆಯೋದಿಲ್ಲ ಎಂದು ನಿರ್ಧರಿಸಿದ್ದೇನೆ.


-ಗಗನ  ಮೈತ್ರಿ