ಗುರುವಾರ, ಏಪ್ರಿಲ್ 23, 2015

ಮುಂದಿರುವ ಮರ - ಇಳಿಸಿತೆಲ್ಲಾ ಮನದ ಭಾರ..


ಹಿಂದೆ ಏನೇನೋ ಸಿಕ್ಕಿದೆಲ್ಲವ ಸರಿಸಿ
ಕಾಣದ್ದೆನ್ನನೋ ಪಡೆಯುವ ಉತ್ಕಟ ಹಂಬಲ
ಬೇಕಿರುವುದು ಕಾಡ ಮಧ್ಯೆ
ಧುಪ ಮರದ ಮೇಲೆ ಆಡುವ ಚಿಟ್ಟೆಗಾನವೋ
ಪಟ್ಟಣದ ಪೊರಕಿಗಳ ಬಾಹು ಬಂಧನವೋ
ಆಡಿದ್ದೆಲ್ಲವ ಕೇಳುವ ಬಂಡೆ ಕಲ್ಲೋ
ಆಡಲೇ ಬಿಡದೆ ಭೋರ್ಗರೆಯುವ ಕಡಲ ಕಿನಾರೆಯೋ
ಲಜ್ಜೆಗೆ ಮೀರಿದ್ದೋ
ಬಂದು ಮತ್ತೆಂದೂ ಬಾರದೆ ಮಾಯವಾಗೋ ಕ್ಷಣಿಕವೋ
ಒಂದೂ ಅರಿಯೇ..

ಗಾಳಿ ಮಧ್ಯೆ ಮಾತು ಹಂಚುತ್ತಿರುವ ನಿನ್ನ ಕಂಡೆ
ಮೌನ ಮುದ್ದಾಡಿತು, ಅಲುಗದೆ ಅನುಭವಿಸಿದೆ
ದೂರ ಹರಿಯುವ ನೀರ ಹೊಳೆ
ಕಿವಿ ಪದರದ ತುದಿಗೆ ಜೀವ ಬಂತಂತೆ!
ಒಳಗೆ ಒಂದೇ ಸಮನೆ ಹರಟುತ್ತಿದ್ದೇ
ಕೇಳುವರಾರಿಲ್ಲವೆಂಬ ಪರಿವೂ ಇಲ್ಲದೆ
ನನಗೂ ಬೇಕಿರುವುದು ಇಷ್ಟೇ..
ಹಬೆ ಆರದ ನೆಮ್ಮದಿಯ ಬದುಕಿಗೆ
ರವಷ್ಟು ತುಪ್ಪ ಸುರಿದ ಅಡಿಗೆ.


ಬೇಕು ಎನಿಸುವುದೇ ಒಂದು ಬ್ರಹ್ಮೆ
ಬೇಕಿರುವುದ್ದೆಲ್ಲವೂ ನಮ್ಮಲ್ಲೇ ಇದೇ
ಅಚಲ ಬೇರೂರಿ ನಿಂತರೆ ಸಾಕು
ನಮಗೆ ಬೇಕಿರುವುದು ಕೆಲವೊಮ್ಮೆ ನಮ್ಮನ್ನೂ ಹುಡುಕುವುದುಂಟಂತೆ..