ಕೊಕ್ಕಿನೊಳು ಸಿಕ್ಕಿಬಿದ್ದ ಜೀವದಂತೆ
ದುಃಖ ಉಮ್ಮಳಿಸಿ ಬಂದರೆ ಹಿಂದಿನಂತೆ?
ಅದೆಂಥ ದಿನಗಳವು
ಜಿಗಿದಾಡುತಿತ್ತು ಮನ ಜಗದಗಲವು ಸ್ವಚ್ಛ ಸ್ವಪ್ನ ಸೀಮೆಯಲಿ,ಮೀರಿಸುವ
ಎದೆಬಡಿತವಿತ್ತು ಗಾಳಿಯೊಂದಿಗೆ ಪೈಪೋಟಿಯೊಳು
ಮರೆಯಾಗಿಯೇ ಹೋದವು ;ಅದೆಂಥ ದಿನಗಳವು
ರಾಶಿ ಬೀಜ ಉದುಕಿ ತಂದು ,ಕಂಗಳ
ಹೊಲದಲೊಬ್ಬಳೇ ಬಿತ್ತಿ ನಲಿದಿದ್ದೆನು
ಈಗ ಪಟಪಟಿಸುವ ರೆಪ್ಪೆ ಮೊಳೆತ ಚೂಪು
ತಾಗಿ ಇರಿಯುತಿರೆ ಅಭಿಮಾನದಲಿ ಶುಭ ಹೇಳ ಹೋಗಲೇನು ?
ಬಾನು ಬಣ್ಣ ಗೊಂದಲದಲಿ ನಕ್ಕು ನಲಿದಿದ್ದೆನು
ಪಾರಿಜಾತ ಗಿರಿಯ ಹಾರ ಹಿಡಿದು ಕಾದಿದ್ದೆನು
ಈಗ ಮುಗಿಲ ಕದದಲಿ ನಗುತಿಹುದು ಗೇಲಿ ಬೀಗ
ನಾನೀಗ ಶೃತಿಹಿಡಿದ ಮೌನರಾಗ !