ಕೊಕ್ಕಿನೊಳು ಸಿಕ್ಕಿಬಿದ್ದ ಜೀವದಂತೆ
ದುಃಖ ಉಮ್ಮಳಿಸಿ ಬಂದರೆ ಹಿಂದಿನಂತೆ?
ಅದೆಂಥ ದಿನಗಳವು
ಜಿಗಿದಾಡುತಿತ್ತು ಮನ ಜಗದಗಲವು ಸ್ವಚ್ಛ ಸ್ವಪ್ನ ಸೀಮೆಯಲಿ,ಮೀರಿಸುವ
ಎದೆಬಡಿತವಿತ್ತು ಗಾಳಿಯೊಂದಿಗೆ ಪೈಪೋಟಿಯೊಳು
ಮರೆಯಾಗಿಯೇ ಹೋದವು ;ಅದೆಂಥ ದಿನಗಳವು
ರಾಶಿ ಬೀಜ ಉದುಕಿ ತಂದು ,ಕಂಗಳ
ಹೊಲದಲೊಬ್ಬಳೇ ಬಿತ್ತಿ ನಲಿದಿದ್ದೆನು
ಈಗ ಪಟಪಟಿಸುವ ರೆಪ್ಪೆ ಮೊಳೆತ ಚೂಪು
ತಾಗಿ ಇರಿಯುತಿರೆ ಅಭಿಮಾನದಲಿ ಶುಭ ಹೇಳ ಹೋಗಲೇನು ?
ಬಾನು ಬಣ್ಣ ಗೊಂದಲದಲಿ ನಕ್ಕು ನಲಿದಿದ್ದೆನು
ಪಾರಿಜಾತ ಗಿರಿಯ ಹಾರ ಹಿಡಿದು ಕಾದಿದ್ದೆನು
ಈಗ ಮುಗಿಲ ಕದದಲಿ ನಗುತಿಹುದು ಗೇಲಿ ಬೀಗ
ನಾನೀಗ ಶೃತಿಹಿಡಿದ ಮೌನರಾಗ !
ಇಷ್ಟವಾಯಿತು...
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿNice Kannada Lines...:) Everything is Neat & Clear Blogspot...:) I Impressed Your Blog...:)
ಪ್ರತ್ಯುತ್ತರಅಳಿಸಿThanks & Regards,
Rakesh S Kadam
www.coolcollectionsforall.com