ಜನರ ಬಲಿಷ್ಠ ನಂಬಿಕೆಗಳ ಬುಡಕ್ಕೆ
ಕೊಳ್ಳಿ ಇಡಲು ಯತ್ನಿಸುವ ನಾವು
ಹಿಡಿದ ಅಷ್ಟೂ ದಾರಿಯೂ ಒರಟಾದದ್ದೇ
ದ್ವಂದ್ವಕ್ಕಿಳಿದ ಹುಚ್ಚಾಟವೆನಲ್ಲಾ ಇದು
ಸರಿ ತಪ್ಪುಗಳ ನಡುವೆ ಇರುವ
ರೇಷ್ಮೆ ಎಳೆಯ ಅಂತರ ಅತ್ತಿಂದ ಇತ್ತ ,ಇತ್ತಿಂದ ಅತ್ತ
ಚಲಿಸುತ್ತಾ ಮನಸ್ಸಿಗೆ ಇರಿಯಲಾರಂಭಿಸಿರುತ್ತದೆ
ಹೋರಾಟದ ಬುಗ್ಗೆ ತಣ್ಣಗಾಗಬೇಕಾದರೆ
ಕ್ರಾಂತಿಯಾಗಬೇಕು ಇಲ್ಲವೋ ಪ್ರಯೋಗಗಳು ವಿಫಲವಾಗಬೇಕು
ಸ್ವಲ್ಪ ಸಹಿಸಿಕೊಳ್ಳಿ ಸುಂದರ ಮಾನುಷ್ಯರಾಗಲು ಹೊರಟವರು ನಾವು
ಹರಿಸಬೇಕ್ಕಿದ್ದ ಅಷ್ಟೂ ಕಣ್ಣಿರೂ
ಗಳಿಸಬೇಕ್ಕಿದ್ದ ಎಷ್ಟೋ ಕರುಣೆಯನ್ನು
ವಿನಮ್ರವಾಗಿ ಅಲ್ಲಗಳೆದಿದ್ದೇವೆ
ಭಂಡತನವೆನಬೇಡಿ ಈ ವ್ಯಕ್ತಿ ವೈಶಿಷ್ಟ್ಯತೆಯನ್ನು
ಕರೆದೊಮ್ಮೆ ಎದೆಗಪ್ಪಿ ಕೇಳಿ ನೋಡಿ
ತರಂಗಗಳೇಳಬಹುದು ನಿಮ್ಮ ಅಂತರಂಗದ ತೀರದಲ್ಲೂ..
ಕೊಳ್ಳಿ ಇಡಲು ಯತ್ನಿಸುವ ನಾವು
ಹಿಡಿದ ಅಷ್ಟೂ ದಾರಿಯೂ ಒರಟಾದದ್ದೇ
ದ್ವಂದ್ವಕ್ಕಿಳಿದ ಹುಚ್ಚಾಟವೆನಲ್ಲಾ ಇದು
ಸರಿ ತಪ್ಪುಗಳ ನಡುವೆ ಇರುವ
ರೇಷ್ಮೆ ಎಳೆಯ ಅಂತರ ಅತ್ತಿಂದ ಇತ್ತ ,ಇತ್ತಿಂದ ಅತ್ತ
ಚಲಿಸುತ್ತಾ ಮನಸ್ಸಿಗೆ ಇರಿಯಲಾರಂಭಿಸಿರುತ್ತದೆ
ಹೋರಾಟದ ಬುಗ್ಗೆ ತಣ್ಣಗಾಗಬೇಕಾದರೆ
ಕ್ರಾಂತಿಯಾಗಬೇಕು ಇಲ್ಲವೋ ಪ್ರಯೋಗಗಳು ವಿಫಲವಾಗಬೇಕು
ಸ್ವಲ್ಪ ಸಹಿಸಿಕೊಳ್ಳಿ ಸುಂದರ ಮಾನುಷ್ಯರಾಗಲು ಹೊರಟವರು ನಾವು
ಹರಿಸಬೇಕ್ಕಿದ್ದ ಅಷ್ಟೂ ಕಣ್ಣಿರೂ
ಗಳಿಸಬೇಕ್ಕಿದ್ದ ಎಷ್ಟೋ ಕರುಣೆಯನ್ನು
ವಿನಮ್ರವಾಗಿ ಅಲ್ಲಗಳೆದಿದ್ದೇವೆ
ಭಂಡತನವೆನಬೇಡಿ ಈ ವ್ಯಕ್ತಿ ವೈಶಿಷ್ಟ್ಯತೆಯನ್ನು
ಕರೆದೊಮ್ಮೆ ಎದೆಗಪ್ಪಿ ಕೇಳಿ ನೋಡಿ
ತರಂಗಗಳೇಳಬಹುದು ನಿಮ್ಮ ಅಂತರಂಗದ ತೀರದಲ್ಲೂ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ