ಶನಿವಾರ, ಸೆಪ್ಟೆಂಬರ್ 6, 2014

ಅರಿವಾಗುತ್ತಿದೆ 
ಅರಿವಾಗುವ ವಿಧಿ ವಿಧಾನ
ನನಗರಿವಾದದ್ದು ಪರರಿಗದು ಮಿತವಾದರೆ
ಪರಮಾತ್ಮನಾ ಚಿತ್ತವೂ ಸಹ ದೂಷಣೆಗೆ ಅರ್ಹ 

ವಿಮರ್ಶೆಗೆಂದು ಬಂದವ
ವಾದಗಳ ವರಮಾನ ಬೇಡವೆಂದಾನೇ?
ವಾದಕ್ಕಿಳಿದ ಮನಸ್ಸು ಮುಳ್ಳಿರದ ತಕ್ಕಡಿಯಿದ್ದಂತೆ
ದೂಷಿಸಲ್ಹೊರಟವ ಈಗ ದೂಷಣೆಗೆ ಅರ್ಹ!

ನನಗೂ ನಿನಗೂ ಕಂಡ ಒಂದು
ಬೇರೊಬ್ಬನಿಗೆ ನೂರೆನಿಸಿದರೆ
ಕಂಡದ್ದನ್ನೂ,ಅನಿಸಿದ್ದನ್ನೂ ತೂಗಿ ಹಾಕಬೇಕೆ?
ಮನಸಿಗೊಮ್ಮೆ ನಾಟಿದ್ದೇ ಮೆದುಳೊರೆಗೆ ಅರಿವಾಗಿ ಬೆಳೆದದ್ದಲ್ಲವೇ!

ಆಗೆಂದೋ ನಾಟಿದ್ದು ,ಈಗೇಕೆ ಮರವಾಯಿತೆಂದು ಅನಿಸಿದರೆ
ಪ್ರಕೃತಿಗಂಟಿದ ಪ್ರಶ್ನೆಗಳಿವೆಲ್ಲಾ ಎಂದು ಅರಿವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ