ಶುಕ್ರವಾರ, ಸೆಪ್ಟೆಂಬರ್ 5, 2014

ಸ್ವಾಭಿಮಾನ ..

ಸಾಯುವ ಹಸಿವಿದ್ದರು
ಸ್ವಾಭಿಮಾನದ ಚಿಂತೆ
ಬಯಸಿ ಕೊಂಡ ಹಣ್ಣು 
ಹೊಟ್ಟೆ ಸೇರಿದ ತರುವಾಯ 
ತಿಂದೆ ಎನ್ನ ಕೊಲೆಗಾರ್ತಿ ಎಂದರೇ ?

ದಿನಕ್ಕೊಂದು ಎದೆಕಂಪಿಸುವ ಸವಾಲು
ಬಿಡಿಸದಿದ್ದರೆ ಕವಲೊಡೆದು 
ಎದೆ ಸೀಳಿ ಪ್ರತಿಭಟಿಸುವುದು
ಬಿಡಿಸಿದರೆ ಇನ್ನು ಮಜಬೂತು 
ನಾಳೆ ಬರುವವು

ನೂಕಿ ಭಯದ ಮಡುವಿಗೆ 
ಅವನಿಗೆನ್ನ ಅನಿಶ್ಚಿತ
ಗುರಿ ಮುಟ್ಟಿಸುವ ಹೆಬ್ಬಯಕೆ
ಕತ್ತಿಯಲಗಿನ ನಡೆಯಲ್ಲಿ
ಕಾಲು ಕೊಯ್ದು ರಕ್ತ ಸುರಿದರು 
ಕೈಚಾಚಿ ಅವನಿಗಾಗಿ
ಹೂ ಕೀಳುವ ಸ್ವಾರ್ಥ ನನಗೆ

ವಿರಹ ಜಾರಿ ಇಳೆಗೆ 
ಅನಿವಾರ್ಯದ ಕಡಲು ಸೇರಿದೆ 
ಎದೆಬಡಿತವು ತುಟಿಗೆರೆಗಳು
ಕೂಡಿಕೊಂಡ ತರುವಾಯ 
ಮಲಿನವಾಯಿತಲ್ಲೇ ಮೈಮನ ಎಂದರೇ ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ